ಮೋಜ ನೋಡಿರಿ ಗಾಂಜಿಯಮಕಿನ

ಮೋಜ ನೋಡಿರಿ ಗಾಂಜಿಯಮಕಿನ
ತೇಜಿಯೇರಿದ್ಹಾಂಗ ಜುಲಾಸ್ತದ ಅಮಲಾ
ಈ ಜನರಿನ್ನೇನಿದು ಬಲ್ಲರು ದುರ್ಗುಣ ಮಾಡುವಂತಿರಲು
ಸಹಜವಾದ ಸದ್ಬೀಜದ ಮಹಿಜನವನದಲ್ಲು ಫಲವಾಗಿರಲು
ಶ್ರೀಜಗದೀಶನ ಪೂಜಿತ ಮುನಿಜನ ರಾಜೀವನ ಮೋಹಿಸಲು
ಸೋಜಿಗೆನಿಪ ಶುಭವಾದ ವೃಕ್ಷದಲಿ
ಜನಿಸಿದ ಈ ಮುಗುಳು ಚಿಗಿತು ಬೆಳದಿಹುದು ತೇಜಸು ಪುಷ್ಪಗೊಂಚಲ
ಗೊನಿ ಕೆಂಜಾಗಿನ ವರ್ಣದಲಿ ರಾಜಿಸುವದರಿಂದ ಕುಸುಮಾರ್ಗದ ಫಲ
ಕಾಮಿಸಿ ವ್ಯಾಳ್ಯಗಳು ರಾಜಯೋಗಿಗಳು

ನೈಜಾಮದ ಗೋದಾವರಿ ತೀರದ ಜಲದೊಳು ಮರ್ದಿಸಲು
ಶೋಭಿಪ ಸತ್ವ ರಜೋಗುಣ ತತ್ವದ
ತಪ್ಪಲ ಕೂಡಿರಲು ಗುಳಿಗಿಯಾಗಿರಲು
ಸಾಧುಸಂತರನಾದರಿಸುತ ನಿಜಬೋಧದಿ ಮುಳಗಿರಲು ||೧||

ಬೋಧಾಮೃತ ಸಾನಂದದಿ
ಸಾಧಕರು ಕೂಡಿ ಮೋದದಲಿ ನೋಡಿ
ಮೇದಿನಿ ಸ್ಥಲದಂತೆ ಆ ಕೃತಿಯನು ದಂಡಿಸಿದರು ತಿಂಡಿ
ಶೋಭಿಸಿ ಶರೀರ ಬುರುಡಿಗೆ ತನುವಿನ ಮೀರು
ಇದಕೆ ಜೋಡಿ ಜಲದಿ ಒಡಗೂಡಿ
ಶ್ರೀಧರ ಬ್ರಹ್ಮ ಸದಾಶಿವ ಮೂವರು ಆಧಾರವ ಮಾಡಿ
ಕ್ರೋಧಾದಿಗಳನ್ನು ಛೇದಿಸಿ ಜ್ಞಾನದ ಚಿಲುಮೆ-
ಯೊಳಗೆ ನೀಡಿ ಅಗ್ನಿಯನು ತೋಡಿ
ಈ ದಶವಾಯು ಬಿಗಿದು ಸುಷುಮ್ನನಾಳದೊಳಗೆ ಹೂಡಿ
ಆದಿ ಸದ್ಗುರುವಿನ ಕೈಯೊಳಗೊಪ್ಪುವ ನಾದಿನ
ಗುಡಗುಡಿ ಸೇದಿ ನಲಿದಾಡಿ
ಬಾಧಿ ದುರಿತ ಬಹು ಬಂಧನದ ಕರ್ಮವು ಶೋಧಿಸಿ ಈಡ್ಯಾಡಿ ||೨||

ಈ ಪರಿ ಮಹಿಮದ ರೂಪ ನಿರಾಲ
ಪರಂಜ್ಯೋತಿ ನಿರ್ಮಿಸಿದ ರೀತಿ
ಸ್ಥಾಪಿಸಿದನು ಶಿವನಾವ ಪರಲೋಕದ ಕಲ್ಪದ್ರುಮದ ಜಾತಿ
ಕಾಪುರುಷರು ಕುಹಕರಿಗೆ ಸಲ್ಲರು ತಾಪಸಿಯರಿಗೆ ಪ್ರೀತಿ
ತತ್ವದ ನಡತೆ ಸೋಹಂ ಪದಕೇರಿಸಿ ತಾಂ
ಪರವಸ್ತುವ ತೋರಿಕೊಡುವ ರೀತಿ
ಶಾಸ್ತ್ರ ನುಡಿತೈತಿ ಪಾಪರಹಿತ ಪಂಚಾಕ್ಷರಿ ಪಠಿಸುತ
ಜೀವ ಪವನ ಒತ್ತಿ ತ್ರಿಕೂಟದಲ್ಹತ್ತಿ
ತಾ ಚರಿಸ್ಯಾಡುತ ನೋಡಲು ಪಶ್ಚಿಮ ಚಕ್ರದೊಳಗೆ ಸುತ್ತಿ
ಭೂಪತಿ ರಾಜಗೋವಿಂದನ ಅರಮನಿ
ಹೊಳೆವ ಚಂದ್ರಕಾಂತಿ ಮೂಲ ಸಿದ್ಧಾಂತಿ
ಭಾಪುರೆ ಶಿಶುನಾಳಧೀಶನ ವರವಿಲೆ ನಾ ಪಡೆದೆನು ಮುಕ್ತಿ ||೩||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೋಜ ನೋಡಿರಿ ಗಾಂಜಿಯಮಕಿನ
Next post ಒಲವೇ… ಭಾಗ – ೩

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys